ಕರುಣಾನಿಧಿ ನಿಧನಕ್ಕೆ ಸಿಪಿಐ(ಎಂ) ಶ್ರದ್ಧಾಂಜಲಿ

Update: 2018-08-08 15:26 GMT

ಬೆಂಗಳೂರು, ಆ.8: ತಮಿಳುನಾಡಿನ ಧೀಮಂತ ನಾಯಕ, ಉತ್ತಮ ಬರಹಗಾರ, ಮುತ್ಸದ್ದಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಮುತ್ತುವೇಲು ಕರುಣಾನಿಧಿ ನಿಧನಕ್ಕೆ ಸಿಪಿಐ(ಎಂ) ರಾಜಾಜಿನಗರ ವಲಯ ಸಮಿತಿ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.

ತಮಿಳುನಾಡಿನಲ್ಲಿ ಐದು ಬಾರಿ ಮುಖ್ಯಮಂತ್ರಿ, 13 ಬಾರಿ ಶಾಸಕರಾಗಿ, ದ್ರಾವಿಡ ಚಳವಳಿಯ ನೇತಾರರಾಗಿದ್ದ ಕರುಣಾನಿಧಿ, ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರಿಕೆ ವಿರೋಧಿಸಿ ಬೃಹತ್ ಆಂದೋಲನ ನಡೆಸಿದ ಮಹಾನ್ ಹೋರಾಟಗಾರ ಎಂದು ವಲಯ ಸಮಿತಿ ಸದಸ್ಯ ಚಂದ್ರಶೇಖರ್ ತಿಳಿಸಿದ್ದಾರೆ.

ಪ್ರಗತಿಪರ ಬರಹಗಳ ಮೂಲಕ ತಮಿಳು ಭಾಷೆಯ ಹಿಡಿತ ಸಾಧಿಸಿದ ಚತುರ ವಾಗ್ಮಿಯಾಗಿದ್ದರು. ಮಹಿಳೆಯರ, ದೀನ ದಲಿತರ, ಬಡವರ ಧ್ವನಿಯಾಗಿದ್ದ ಕರುಣಾನಿಧಿ, ರಾಜ್ಯ ಸರಕಾರಗಳ ಸ್ವಾಯತ್ತತೆಗೆ ಕಂಕಣಬದ್ಧರಾಗಿ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ದೃಢತೆಯನ್ನು ಹೊಂದಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News