ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ವಾಜಪೇಯಿಗೆ ಶ್ರದ್ಧಾಂಜಲಿ

Update: 2018-08-17 13:12 GMT

ಬೆಂಗಳೂರು, ಆ.17: ಅಟಲ್ ಬಿಹಾರಿ ವಾಜಪೇಯಿ ಅವರಿಗೆ ವಾಜಪೇಯಿ ಅವರೇ ಸಾಟಿ. ವಾಜಪೇಯಿ ಅವರು ಇದ್ದ ಬಿಜೆಪಿಯಲ್ಲಿ ಇದ್ದೇವೆ ಎನ್ನುವುದೇ ನಮ್ಮ ಪುಣ್ಯ, ಅವರ ಪ್ರಾಮಾಣಿಕತೆಯಲ್ಲಿನ ಒಂದು ತುಣುಕು ನಾವಾಗೋಣ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.

ಶುಕ್ರವಾರ ಮಲ್ಲೇಶ್ವರಂನಲ್ಲಿರುವ ಕಚೇರಿಯ ಮುಂಭಾಗದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ವಾಜಪೇಯಿಯವರು ಹೇಳಿದ ನ ದೈನ್ಯಂ ನ ಪಲಾಯನಂ ಎನ್ನುವ ಮಾತುಗಳನ್ನು ಸ್ಮರಿಸಿಕೊಂಡರು. ನಾವಿಂದು ಪಕ್ಷದಲ್ಲಿ ವಿವಿಧ ಹಂತದಲ್ಲಿ ಅಧಿಕಾರ ಅನುಭವಿಸಿದ್ದೇವೆ. ಅದಕ್ಕೆ ಪ್ರತಿಯೊಬ್ಬರ ಜನಮಾನಸದಲ್ಲಿರುವ ವಾಜಪೇಯಿ ಅವರೇ ಕಾರಣ ಎಂದರು.         

ವಿರೋಧ ಪಕ್ಷಗಳು, ಪಾಕಿಸ್ತಾನ ಎಲ್ಲರೂ ಅವರನ್ನು ಕೊಂಡಾಡಿದ್ದಾರೆ. ಹೀಗಾಗಿಯೇ ಅಟಲ್ ಅವರನ್ನು ಅಜಾತಶತ್ರು ಎಂದು ಕರೆಯಲ್ಪಟ್ಟಿದ್ದಾರೆ ಎಂದು ಹೇಳಿದರು. ಈ ವೇಳೆಯಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ರಾಮಚಂದ್ರಗೌಡ, ವಿ.ಸೋಮಣ್ಣ, ಜಗ್ಗೇಶ, ಚಿ.ನಾ.ರಾಮು, ಅಬ್ದುಲ್ ಅಜೀಂ, ಭಾರತಿ ಶೆಟ್ಟಿ, ಶಿವರಾಂ, ಡಿ.ಎಸ್.ವೀರಯ್ಯ, ಪಿ.ಎನ್.ಸದಾಶಿವ, ಪದ್ಮನಾಭರೆಡ್ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News