ಡಾ.ನೌಹೀರಾ ಶೇಕ್ ರಿಂದ ಕೇರಳ ನೆರೆ ಸಂತ್ರಸ್ತರಿಗೆ 1 ಕೋಟಿ ರೂ. ನೆರವು
Update: 2018-08-28 13:18 GMT
ಬೆಂಗಳೂರು, ಆ.28: ಹೈದರಾಬಾದ್ ಮೂಲದ ಹೀರಾ ಗ್ರೂಪ್ಸ್ ನ ಸಿಇಒ ಹಾಗೂ ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ಅವರು ಕೇರಳ ಪ್ರವಾಹ ಸಂತ್ರಸ್ತರಿಗೆ 1ಕೋಟಿ ರೂಪಾಯಿ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಒಂದು ಕೋಟಿ ರೂಪಾಯಿ ಮೌಲ್ಯದ ಚೆಕ್ಕನ್ನು ಅವರು ಕೇರಳ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ (ಸಿಎಂಡಿಆರ್ ಎಫ್) ಈಗಾಗಲೇ ರವಾನಿಸಿದ್ದಾರೆ.
ಇದಲ್ಲದೇ 100 ಟನ್ ಆಹಾರ ಧಾನ್ಯ ಹಾಗೂ ಮಹಿಳೆಯರು ಮಕ್ಕಳಿಗಾಗಿ ಶೆಲ್ಟರ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.
ಶೀಘ್ರವೇ ಅವರು, ಕೇರಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇದೇ ವೇಳೆ ಸಂತ್ರಸ್ತರ ಅಳಲನ್ನು ಆಲಿಸಲಿದ್ದಾರೆ.
ಡಾ.ನೌಹೀರಾ ಶೇಕ್ ಅವರು ಕಳೆದ ವರ್ಷ ಕಾಶ್ಮೀರದ 'ಉರಿ' ಪ್ರದೇಶದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳ ಸದಸ್ಯರಿಗೆ ನೆರವಿನ ಹಸ್ತ ನೀಡಿದ್ದು ಮಾಹೆಯಾನ ಪಿಂಚಣಿ ವ್ಯವಸ್ಥೆ ಕಲ್ಪಿಸಿದ್ದರು.