ಕೇರಳದ ಕುಟ್ಟನಾಡ್ನಲ್ಲಿ ಸ್ವಚ್ಛತಾ ಕಾರ್ಯ: 60,000ಕ್ಕೂ ಅಧಿಕ ಸ್ವಯಂಸೇವಕರು ಭಾಗಿ
Update: 2018-08-28 14:40 GMT
ಹೊಸದಿಲ್ಲಿ,ಆ.28: ಪೃಕೃತಿ ವಿಕೋಪದ ನಂತರದ ಬೃಹತ್ ಸ್ವಚ್ಛತಾ ಕಾರ್ಯಾಚರಣೆಯೊಂದು ನೆರೆಪೀಡಿತ ಕೇರಳದಲ್ಲಿ ನಡೆಯುತ್ತಿದ್ದು,ಅಲಪ್ಪುಳ ಜಿಲ್ಲೆಯ ಕುಟ್ಟನಾಡ್ನಲ್ಲಿ ಸಮಾಜದ ಎಲ್ಲ ಕ್ಷೇತ್ರಗಳಿಗೆ ಸೇರಿದ 60,000ಕ್ಕೂ ಅಧಿಕ ಸ್ವಯಂಸೇವಕರು ಅಹರ್ನಿಶಿ ಶ್ರಮಿಸುತ್ತಿದ್ದಾರೆ.
ಸಚಿವರು,ಇಲೆಕ್ಟ್ರಿಷಿಯನ್ಗಳು,ಪ್ಲಂಬರ್ಗಳು,ಹಾವು ಹಿಡಿಯುವವರು, ಅಧಿಕಾರಿಗಳು ಮತ್ತು ಇತರರು ಸೇರಿದಂತೆ ಸ್ವಯಂಸೇವಕರ ದೊಡ್ಡ ದಂಡೇ ಮುಂದಿನ ಮೂರು ದಿನಗಳ ಕಾಲ ಕುಟ್ಟನಾಡ್ನಲ್ಲಿ ಮೊಕ್ಕಾಂ ಹೂಡಲಿದೆ. ಕುಟ್ಟನಾಡ್ ನೆರೆಹಾವಳಿಗೆ ತುತ್ತಾಗಿದ್ದ ರಾಜ್ಯದ ಮೊದಲ ಪ್ರದೇಶವಾಗಿದೆ.