ರಾಹುಲ್ ಗಾಂಧಿ ‘ಚರಂಡಿಯ ಕ್ರಿಮಿ’ ಎಂದ ಕೇಂದ್ರ ಸಚಿವ ಚೌಬೇ!

Update: 2018-09-01 10:47 GMT

ಹೊಸದಿಲ್ಲಿ, ಸೆ.1: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ಚರಂಡಿಯ ಕ್ರಿಮಿ’ ಎನ್ನುವ ಮೂಲಕ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೇ ವಿವಾದ ಸೃಷ್ಟಿಸಿದ್ದಾರೆ.

“ನಮ್ಮ ಪ್ರಧಾನಿ ಆಕಾಶದಷ್ಟೇ ವಿಸ್ತಾರವಾದವರು. ಆದರೆ ಕಾಂಗ್ರೆಸ್ ಅಧ್ಯಕ್ಷರು ಏನು?, ಅವರು ಚರಂಡಿಯಲ್ಲಿರುವ ಕ್ರಿಮಿಯ ಹಾಗೆ” ಎಂದು ಚೌಬೇ ಹೇಳಿರುವುದಾಗಿ ವರದಿಯಾಗಿದೆ. ಬಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಚೌಬೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದು ಮೊದಲೇನಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News