ಮಾನವಹಕ್ಕು ಕಾರ್ಯಕರ್ತರ ಬಂಧನ ಪ್ರಕರಣ: ಸುದ್ದಿಗೋಷ್ಠಿ ನಡೆಸಿದ ಪೊಲೀಸರ ವಿರುದ್ಧ ಹೈಕೋರ್ಟ್ ಗರಂ

Update: 2018-09-03 07:59 GMT

ಮುಂಬೈ,ಸೆ.3: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಾನವಹಕ್ಕು ಕಾರ್ಯಕರ್ತರ ವಿರುದ್ಧವಿರುವ ಸಾಕ್ಷಿಗಳನ್ನು ಮುಂದಿಟ್ಟು ಸುದ್ದಿಗೋಷ್ಠಿ ನಡೆಸಿದ ಮಹಾರಾಷ್ಟ್ರ ಪೊಲೀಸರನ್ನು ಬಾಂಬೆ ಹೈಕೋರ್ಟ್ ಟೀಕಿಸಿದೆ.

ಪ್ರಕರಣವೊಂದು ನ್ಯಾಯಾಂಗದ ಪರಿಗಣನೆಯಲ್ಲಿರುವಾಗ ಸುದ್ದಿಗೋಷ್ಟಿ ನಡೆಸಲು ಹೇಗೆ ಸಾಧ್ಯ ಎಂದು ಕೋರ್ಟ್ ಪ್ರಶ್ನಿಸಿದೆ.

ಕಾರ್ಯಕರ್ತರದ್ದು ಎನ್ನಲಾದ ಪತ್ರವನ್ನು ಪೊಲೀಸರು ಎಲ್ಲರ ಮುಂದೆ ಓದಿ ಹೇಳಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಎನ್ ಐಎಗೆ ಹಸ್ತಾಂತರಿಸಬೇಕು ಎಂದು ಈ ಪ್ರಕರಣದ ಅರ್ಜಿದಾರರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News