ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ಹೈಕೋರ್ಟ್ ವಕೀಲರಿಂದ ಪೊಲೀಸ್ ದೂರು

Update: 2018-09-07 12:26 GMT

ಬೆಂಗಳೂರು, ಸೆ. 7: ‘ನಾನೂ ನಗರ ನಕ್ಸಲ್’ ಎಂಬ ನಾಮಫಲಕ ಹಾಕಿಕೊಂಡು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಗೆ ವಕೀಲ ಅಮೃತೇಶ್ ದೂರು ನೀಡಿದ್ದಾರೆ.

ನಕ್ಸಲ್ ಸಂಘಟನೆಗಳನ್ನು ನಿಷೇಧಿಸಿದ್ದು, ಆ ಸಂಘಟನೆಗಳನ್ನು ಬಹಿರಂಗವಾಗಿ ಸಮರ್ಥಿಸಿದ್ದು, ‘ನಾನೂ ನಗರ ನಕ್ಸಲ್’ ಎಂದು ಹೇಳಿಕೊಂಡಿರುವ ಗಿರೀಶ್ ಕಾರ್ನಾಡ್ ಅವರನ್ನು ಕೂಡಲೇ ಬಂಧಿಸಬೇಕು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಹಿಂದೆ ಗಿರೀಶ್ ಕಾರ್ನಾಡ್ ಅವರ ಮಹಾರಾಷ್ಟ್ರದ ಕಬೀರ್ ಕಲಾ ಮಂಚ್ ಸಂಘಟನೆ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಇದು ನಿಷೇಧಿತ ಸಂಘಟನೆಯಾಗಿದೆ. ಮಾತ್ರವಲ್ಲ ಸಿಪಿಐ(ಮಾವೋವಾದಿ) ಬೆಂಬಲಿತ ಸಂಘಟನೆಯಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News