ಎರಡು ದಿನದಲ್ಲಿ ರಾಜ್ಯ ಸರಕಾರ ಪತನ: ಕೆ.ಎಸ್.ಈಶ್ವರಪ್ಪ

Update: 2018-09-08 12:37 GMT

ಬೆಂಗಳೂರು, ಸೆ.8: ರಾಜ್ಯದ ಜನತೆ ಎರಡು ದಿನ ಕಾದು ನೋಡಿ, ರಾಜ್ಯದ ಸಮ್ಮಿಶ್ರ ಸರಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಎರಡು ದಿನದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಬಂಧನವು ಆಗಬಹುದು. ಇಲ್ಲವೆ ಸಮ್ಮಿಶ್ರ ಸರಕಾರ ಬಿದ್ದರೂ ಬೀಳಬಹುದು. ಯಾವುದೆ ಕಾರಣಕ್ಕೂ ಬಿಜೆಪಿಗೆ ಸಮ್ಮಿಶ್ರ ಸರಕಾರವನ್ನು ಉರುಳಿಸುವ ಚಿಂತನೆಯಿಲ್ಲ. ಸಮ್ಮಿಶ್ರ ಸರಕಾರದ ನಾಯಕರಿಂದಲೆ ಸರಕಾರ ಪತನವಾಗಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News