ಬೆಂಗಳೂರು: ನವವಿವಾಹಿತೆ ಆತ್ಮಹತ್ಯೆ

Update: 2018-09-09 14:53 GMT

ಬೆಂಗಳೂರು, ಸೆ.9: ಪ್ರಿಯಾಕರ ಮಾತನಾಡಿಸಿಲ್ಲವೆಂದು ಮನನೊಂದು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲದ ಸರಸ್ವತಿಪುರಂನ ಸುಮಾ(28) ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆಯಾಗಿದ್ದಾಳೆ.

ಸುಮಾ ಇತ್ತೀಚೆಗೆ ಹರೀಶ್‌ ಎಂಬ ಯುವಕನನ್ನು ವಿವಾಹವಾಗಿದ್ದಳು. ಮದುವೆಗೂ ಮುನ್ನ ತುಮಕೂರಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಮದುವೆಯ ನಂತರವೂ ತನ್ನ ಪ್ರಿಯಕರನನ್ನು ಭೇಟಿ ಮಾಡಲು ತೆರಳಿದ್ದಳು. ಈ ವೇಳೆ ಪ್ರಿಯಕರ ಆಕೆಯೊಂದಿಗೆ ಮಾತನಾಡಲು ಇಷ್ಟಪಟ್ಟಿಲ್ಲ. ಇದರಿಂದ ಮನನೊಂದು ಕಾರಿನಲ್ಲಿಯೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ನೆಲಮಂಗಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News