ಪೆಪ್ಪರ್ ಸ್ಪ್ರೇ ಬಳಸಿ ಮಹಿಳೆಯ ಚಿನ್ನದ ಸರ ಅಪಹರಣ

Update: 2018-09-09 15:49 GMT

ಬೆಂಗಳೂರು, ಸೆ.9: ವಾಯುವಿಹಾರ ನಡೆಸುತ್ತಿದ್ದ ಮಹಿಳೆಯ ಮುಖಕ್ಕೆ ಪೆಪ್ಪರ್ ಸ್ಪ್ರೇ ಬಳಸಿ ಚಿನ್ನದ ಸರ ಅಪಹರಿಸಿರುವ ಘಟನೆ ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಮಾರುತಿ ನಗರದಲ್ಲಿ ಮಹಿಳೆ ನಿರ್ಮಲಾ ಇಂದು ಬೆಳಗ್ಗೆ ವಾಯುವಿಹಾರ ನಡೆಸುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಆಕೆಯ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಕತ್ತಿನಲ್ಲಿದ್ದ 38ಗ್ರಾಂ ತೂಕದ ಎರಡು ಚಿನ್ನದ ಸರವನ್ನು ಅಪಹರಿಸಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News