ಕೇರಳ ನೆರೆ: ಮಹಿಳೆಯರಿಗೆ ತನ್ನ ಬೆನ್ನೇರಿ ಬೋಟ್ ಹತ್ತಲು ಅವಕಾಶ ನೀಡಿದ ಜೈಸಲ್ ಗೆ ಕಾರು ಉಡುಗೊರೆ
Update: 2018-09-10 16:26 GMT
ಕೊಯಿಕ್ಕೋಡ್, ಸೆ.10: ನೆರೆಯಿಂದ ತತ್ತರಿಸಿದ್ದ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮೊಣಕಾಲಿನವರೆಗೆ ನಿಂತಿದ್ದ ನೀರಿನಲ್ಲಿ ಬೋಟ್ ಹತ್ತಲು ಪರದಾಡುತ್ತಿದ್ದ ಮಹಿಳೆಯರಿಗೆ ತನ್ನ ಬೆನ್ನೇರಿ ಬೋಟ್ ಹತ್ತಲು ಅವಕಾಶ ಮಾಡಿಕೊಟ್ಟ ಜೈಸಲ್ ಕೆ.ಪಿ. ಎಂಬ ಬೆಸ್ತನಿಗೆ ಮಹೀಂದ್ರಾ ಸಂಸ್ಥೆ ನೂತನ ಕಾರ್ ಉಡುಗೊರೆಯಾಗಿ ನೀಡಿದೆ.
ಜೈಸಲ್ ಅವರ ಹೃದಯಸ್ಪರ್ಶಿ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅವರು ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೊಯಿಕ್ಕೋಡ್ನ ಮಹೀಂದ್ರಾ ವಾಹನ ಡೀಲರ್ ಜೈಸಲ್ ಅವರಿಗೆ ಹೊಸ ಕಾರನ್ನು ಉಡುಗೊರೆಯಾಗಿ ನೀಡಿದೆ. ಕೇರಳ ಅಬಕಾರಿ ಮತ್ತು ಕಾರ್ಮಿಕ ಸಚಿವ ಟಿ.ಪಿ. ರಾಮಕೃಷ್ಣನ್ ಅವರು ಜೈಸಲ್ ಕೆ.ಪಿ.ಗೆ ಕಾರನ್ನು ಹಸ್ತಾಂತರಿಸುತ್ತಿರುವ ಚಿತ್ರಗಳನ್ನು ಟ್ವಿಟರ್ನಲ್ಲಿ ಹರಿದಾಡುತ್ತಿವೆ.