ಕಿರುತೆರೆ ನಟಿಗೆ ಜೀವ ಬೆದರಿಕೆ: ಆರೋಪ

Update: 2018-09-11 17:05 GMT

ಬೆಂಗಳೂರು, ಸೆ.11: ಕಿರುತೆರೆ ನಟಿಯೊಬ್ಬರಿಂದ ನಗದು ಪಡೆದು ಹಿಂದಿರುಗಿಸದೆ ಜೀವ ಬೆದರಿಕೆವೊಡ್ಡುತ್ತಿದ್ದಾರೆಂದು ಆರೋಪಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕಾವ್ಯಾ ಎಂಬಾಕೆ ಪೊಲೀಸರಿಗೆ ದೂರು ನೀಡಿದ್ದು, ರಘು ಎಂಬುವರು 10 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಣ ಹಿಂದಿರುಗಿಸುವಂತೆ ಕೇಳಿದರೆ ಜೀವಬೆದರಿಕೆ ಹಾಕುತ್ತಿದ್ದಾನೆಂದು ದೂರಿನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News