ವಿದ್ಯಾರ್ಥಿಗಳಿಂದ ಲೇಖನ ಆಹ್ವಾನ

Update: 2018-09-19 15:27 GMT

ಬೆಂಗಳೂರು, ಸೆ.19: ಯುವಜನರ ಮಾಸ ಪತ್ರಿಕೆ ‘ವಿದ್ಯಾರ್ಥಿ ಪಥ’ ವತಿಯಿಂದ ‘ಅಶಾಂತ ಜಗತ್ತಿಗೆ ಶಾಂತಿಯ ಉತ್ತರ: ಗಾಂಧಿ ಮಾದರಿ’ ಎಂಬ ವಿಷಯದ ಬಗೆಗೆ ವಿದ್ಯಾರ್ಥಿಗಳಿಂದ ಲೇಖನಗಳನ್ನು ಆಹ್ವಾನಿಸುತ್ತಿದೆ. 

ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಕಾನೂನು, ವೈದ್ಯಕೀಯ, ಇಂಜಿನಿಯರಿಂಗ್, ಡಿಪ್ಲೋಮಾ ಮೊದಲಾದ ಯಾವುದೇ ಭಾಗದ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಮೊದಲ ಮೂರು ಬರಹಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದು ಹಾಗೂ ಆ ಲೇಖನಗಳನ್ನು ವಿದ್ಯಾರ್ಥಿ ಪಥ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಬರಹಗಳು 600 ಪದಗಳನ್ನು ಮೀರಬಾರದು, ಲೇಖನದ ಜೊತೆಗೆ ಹೆಸರು, ವಿಳಾಸ, ಕಾಲೇಜು, ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು. ಆಸಕ್ತರು ತಮ್ಮ ಬರಹಗಳನ್ನು editor.vpatha@gmail.com ವಿಳಾಸಕ್ಕೆ ಕಳುಹಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ 94496-63744, 94817-13776 ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News