ಪತಿಯ ಅಪಹರಣ ಪ್ರಕರಣ: ಪತ್ನಿ ಸೆರೆ

Update: 2018-10-10 16:42 GMT

ಬೆಂಗಳೂರು, ಅ.10: ಆಸ್ತಿ ವಿಚಾರ ಸಂಬಂಧ ಪತಿಯನ್ನೇ ಅಪಹರಿಸಿದ ಆರೋಪ ಪ್ರಕರಣ ಸಂಬಂಧ ಪತ್ನಿಯನ್ನು ಇಲ್ಲಿನ ಎಎಚ್‌ಎಎಲ್ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ನಗರದ ಮುನಿರತ್ನಮ್ಮ ಎಂಬಾಕೆ ಬಂಧಿತ ಪತ್ನಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮುನಿರತ್ನಮ್ಮ, ಅ.5ರಂದು ಮಕ್ಕಳು ಹಾಗೂ ತನ್ನ ಸಂಬಂಧಿಕರೊಂದಿಗೆ ಸೇರಿ ಪತಿ ರಾಮಚಂದ್ರಪ್ಪನನ್ನು ಅಪಹರಿಸಿ, ಬೊಮ್ಮಸಂದ್ರದ ಕಿತ್ತಗಾನಹಳ್ಳಿಯಲ್ಲಿ ಕೂಡಿ ಹಾಕಿದ್ದರು ಎನ್ನಲಾಗಿದೆ.

ಈ ವೇಳೆ ಆಸ್ತಿ ಪತ್ರಕ್ಕೆ ಸಹಿ ಹಾಕುವಂತೆ ಪತಿ ರಾಮಚಂದ್ರಪ್ಪ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ರಾಮಚಂದ್ರನನ್ನು ಪೊಲೀಸರು ರಕ್ಷಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರತ್ನಮ್ಮ ಮತ್ತು ಅವರ ಮಕ್ಕಳಾದ ಚೇತನ್ ಮತ್ತು ಅಭಿಷೇಕ್, ಹಾಗೂ ಸಂಬಂಧಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News