ಶ್ರೀನಗರದಲ್ಲಿ ಎನ್ ಕೌಂಟರ್ : ಮೂವರು ಉಗ್ರರು , ಓರ್ವ ಪೊಲೀಸ್ ಬಲಿ

Update: 2018-10-17 07:00 GMT

ಶ್ರೀನಗರ, ಅ.18: ಶ್ರೀನಗರದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಸಂಭವಿಸಿದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಮತ್ತು ಮೂವರು ಉಗ್ರರು ಬಲಿಯಾದ ಘಟನೆ ಬುಧವಾರ ಬೆಳಗ್ಗೆ ಶ್ರೀನರದಲ್ಲಿ ಸಂಭಿಸಿದೆ.

ಅಡಗಿ ಕುಳಿತಿರುವ ಉಗ್ರರನ್ನು ಸದೆ ಬಡಿಯಲು ಸೇನೆ ಮತ್ತು  ಪೊಲೀಸರು  ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾಗ  ಉಗ್ರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದರು. ಆಗ ಭಧ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಎಂದು ಪೊಲೀಸ್ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಕೊಲ್ಲಲಾಗಿದೆ. ಓರ್ವ ಪೊಲೀಸ್ ಸಿಬಂದಿ ಹುತಾತ್ಮರಾಗಿದ್ದಾರೆ. ಪ್ಯಾರಾ ಮಿಲಿಟರಿಯ ಕೆಲವು ಮಂದಿ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷರಾದ  ಇಮ್ತಿಯಾಝ್ ಇಸ್ಮಾಯೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News