ಮತ್ತೆ ವಿಚಾರಣೆಗೆ ಹಾಜರಾದ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ

Update: 2018-10-17 15:21 GMT

ಬೆಂಗಳೂರು, ಅ.17: ಆದಾಯಕ್ಕಿಂತ ಅಧಿಕ ಸಂಪತ್ತು ಸಂಪಾದನೆ ಆರೋಪದಡಿ ಎಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿದ್ದ ಪ್ರಕರಣ ಸಂಬಂಧ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ ಬುಧವಾರ ವಿಚಾರಣೆಗೆ ಹಾಜರಾಗಿದ್ದಾರೆ.

ಬುಧವಾರ ನಗರದ ರೇಸ್‌ಕೋರ್ಸ್ ರಸ್ತೆಯ ಎಸಿಬಿ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ಟಿ.ಆರ್.ಸ್ವಾಮಿ ಅವರನ್ನು ಎಸಿಬಿ ಡಿವೈಎಸ್ಪಿ ಶಿವಶಂಕರ್ ರೆಡ್ಡಿ ವಿಚಾರಣೆ ನಡೆಸಿ, ಮಾಹಿತಿ ದಾಖಲು ಮಾಡಿದರು.

ಎರಡು ಬಾರಿ ವಿಚಾರಣೆಗೆ ಕರೆದು ಟಿ.ಆರ್.ಸ್ವಾಮಿ ಅವರನ್ನು ತೀವ್ರ ವಿಚಾರಣೆ ನಡೆಸಿದ ತನಿಖಾಧಿಕಾರಿಗಳು, ಅಕ್ರಮ ಆಸ್ತಿ ಗಳಿಕೆ, ಮನೆಯಲ್ಲಿ ಪತ್ತೆಯಾದ ನಗದು, ಚಿನ್ನಾಭರಣ ದಾಖಲೆಗಳ ಕುರಿತು ಪ್ರಶ್ನೆ ಮಾಡಿದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News