850ಕ್ಕೂ ಅಧಿಕ ರೈತರ ಸಾಲ ತೀರಿಸಲಿರುವ ಅಮಿತಾಭ್

Update: 2018-10-19 18:27 GMT

ಮುಂಬೈ,ಅ.19: ಉತ್ತರ ಪ್ರದೇಶದ 850ಕ್ಕೂ ಅಧಿಕ ರೈತರ ಬ್ಯಾಂಕ್ ಸಾಲಗಳನ್ನು ತಾನು ತೀರಿಸುವುದಾಗಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಘೋಷಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ 350ಕ್ಕೂ ಅಧಿಕ ರೈತರ ಸಾಲಗಳನ್ನು ತಾನು ತೀರಿಸಿದ್ದೇನೆ. ಇದೀಗ ಉತ್ತರ ಪ್ರದೇಶದ 850ಕ್ಕೂ ಅಧಿಕ ರೈತರನ್ನು ಗುರುತಿಸಲಾಗಿದ್ದು,ಅವರ ಒಟ್ಟು 5.5ಕೋ.ರೂ.ಗೂ ಹೆಚ್ಚಿನ ಸಾಲಬಾಕಿಯನ್ನು ತೀರಿಸುವುದಾಗಿ ಅಮಿತಾಭ್ ತನ್ನ ಬ್ಲಾಗ್ ಸ್ಪಾಟ್‌ನಲ್ಲಿ ಬರೆದುಕೊಂಡಿದ್ದಾರೆ.

ಕೌನ್ ಬನೇಗಾ ಕರೋಡ್ ಪತಿ(ಕೆಬಿಸಿ)ಯ ‘ಕರ್ಮವೀರ್’ ನಲ್ಲಿ ಕಾಣಿಸಿಕೊಂಡಿದ್ದ ,ಬಲವಂತದಿಂದ ವೇಶ್ಯಾವೃತ್ತಿಗೆ ತಳ್ಳಲ್ಪಟ್ಟಿರುವ ಮಹಿಳೆಯರ ರಕ್ಷಣೆಗಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತ ಅಜಿತ್ ಸಿಂಗ್ ಅವರಿಗೂ ತನ್ನ ಕೊಡುಗೆಯನ್ನು ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News