ಮನೆಗೆ ನುಗ್ಗಿ ದರೋಡೆ: ಯುವತಿ ಸೇರಿ ಐವರ ಬಂಧನ

Update: 2018-10-22 12:56 GMT

ಬೆಂಗಳೂರು, ಅ.22: ಮನೆಗೆ ನುಗ್ಗಿ ದರೋಡೆ ಮಾಡಿದ್ದ ಆರೋಪದಡಿ ಯುವತಿ ಸೇರಿ ಐವರನ್ನು ಬಂಧಿಸಿ ಇಲ್ಲಿನ ಮೈಕೋಲೇಔಟ್ ಠಾಣಾ ಪೊಲೀಸರು, 5 ಸಾವಿರ ರೂ. ನಗದು ಹಾಗೂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಕಾಮಾಕ್ಷಿಪಾಳ್ಯದ ನಿವಾಸಿಗಳಾದ ಎನ್.ಸ್ವಾಮಿ(26), ಪ್ರದೀಪ್ ಕುಮಾರ್ (26), ಅಂಜನಾಗರ ಮುದ್ದಿನಪಾಳ್ಯ ನಿವಾಸಿ ಗಂಗಾಧರ್ (28), ಕಾವೇರಿಪುರದ ಪ್ರಶಾಂತ್ ಕುಮಾರ್ (30), ಕೆಎಸ್ಸಾರ್ಟಿಸಿ ಲೇಔಟ್‌ನ ಅಶ್ವಿನಿ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಮೈಕೋಲೇಔಟ್‌ನ ನಿವಾಸಿ ರಂಜಿತಾ ಎಂಬವರ ಮನೆಗೆ ನುಗ್ಗಿ ಚಾಕು ತೋರಿಸಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ, 30 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ರಂಜಿತಾ ಅವರ ಸ್ನೇಹಿತೆಯಾದ ಅಶ್ವಿನಿ ಅವರು ಉಳಿದ ಆರೋಪಿಗಳೊಂದಿಗೆ ಶಾಮೀಲಾಗಿ ಹಣದಾಸೆಗೆ ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News