ಶಬರಿಮಲೆ ತೀರ್ಪು ಸ್ವಾಗತಿಸಿದ್ದ ಸ್ವಾಮಿ ಸಂದೀಪಾನಂದ ಗಿರಿ ಆಶ್ರಮದ ಮೇಲೆ ದಾಳಿ

Update: 2018-10-27 06:02 GMT

ತಿರುವನಂತಪುರ, ಅ.27: ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟಿನ ತೀರ್ಪನ್ನು ಸ್ವಾಗತಿಸಿದ್ದ ಕೇರಳದ ತಿರುವನಂತಪುರದ ಕುಂಡಮಂಕಡವುದಲ್ಲಿರುವ ಸ್ವಾಮಿ ಸಂದೀಪಾನಂದ ಗಿರಿ ಆಶ್ರಮದ ಮೇಲೆ ದುಷ್ಕರ್ಮಿಗಳ ತಂಡ ಶನಿವಾರ ಬೆಳಗ್ಗೆ ದಾಳಿ ನಡೆಸಿದೆ.

ದುಷ್ಕರ್ಮಿಗಳು ಆಶ್ರಮಕ್ಕೆ ಸೇರಿರುವ ಎರಡು ಕಾರುಗಳು ಹಾಗೂ ಎರಡು ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟಿದ್ದಾರೆ.

ಆಶ್ರಮದ ಮೇಲಿನ ದಾಳಿಯನ್ನು ಖಂಡಿಸಿರುವ ಕೇರಳ ಮುಖ್ಯಮಂತ್ರಿ ಪಿ.ವಿಜಯನ್,‘‘ಸಂದೀಪಾನಂದ ಗಿರಿ ಆಶ್ರಮದ ಮೇಲೆ ನಡೆಸಿರುವ ದಾಳಿ ಖಂಡನೀಯ. ಸೈದ್ದಾಂತಿಕವಾಗಿ ಒಪ್ಪದಿದ್ದರೆ ದೈಹಿಕ ಹಲ್ಲೆಗಳು ನಡೆಯುತ್ತವೆ. ಯಾರಿಗೂ ಕಾನೂನು ್ನ ಕೈಗೆತ್ತಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ’’ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News