‘ಅಮ್ಮ ಪ್ರಶಸ್ತಿ’ ಪ್ರಕಟ: ಪ್ರಕಾಶ್‌ ರೈ, ವಿಕ್ರಮ ವಿಸಾಜಿ ಕೃತಿಗಳು ಆಯ್ಕೆ

Update: 2018-11-11 15:30 GMT
ಪ್ರಕಾಶ್‌ ರೈ

ಕಲಬುರ್ಗಿ, ನ.11: ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ನೀಡಲಾಗುವುದು ರಾಜ್ಯಮಟ್ಟದ ಅಮ್ಮ ಪ್ರಶಸ್ತಿಗೆ ಹಿರಿಯ ಬಹುಭಾಷಾ ನಟ ಪ್ರಕಾಶ ರೈ, ಲೇಖಕ ಡಾ.ವಿಕ್ರಮ ವಿಸಾಜಿ, ಕವಯತ್ರಿ ರೇಣುಕಾ ರಮಾನಂದ, ಕಾದಂಬರಿಕಾರ ಯ.ರು.ಪಾಟೀಲ, ಕತೆಗಾರ ಶಶಿಕಾಂತ ದೇಸಾಯಿ ಅವರ ಕೃತಿಗಳು ಆಯ್ಕೆಯಾಗಿವೆ.

ಲೇಖಕ ಪ್ರಕಾಶ್ ರೈರವರ ‘ಇರುವುದೆಲ್ಲ ಬಿಟ್ಟು’(ಲೇಖನಗಳ ಸಂಕಲನ), ಬೀದರಿನ ಡಾ.ವಿಕ್ರಮ ವಿಸಾಜಿರವರ ‘ರಸಗಂಗಾಧರ’(ನಾಟಕ), ಉತ್ತರ ಕನ್ನಡದ ರೇಣುಕಾ ರಮಾನಂದರವರ ‘ಮೀನುಪೇಟೆಯ ತಿರುವು’(ಕಾವ್ಯ), ಬೆಳಗಾವಿಯ ಯ.ರು.ಪಾಟೀಲ ಅವರ ‘ಬೆಳ್ಳಿಚುಕ್ಕಿಯ ಬಂಗಾರದ ಕನಸು(ಕಾದಂಬರಿ) ಮತ್ತು ಕಲಬರ್ಗಿಯ ಶಶಿಕಾಂತ ದೇಸಾಯಿರವರ ‘ಕಂಬಳಿಯ ಕೆಂಡ(ಕತಾ ಸಂಕಲನ) ಕೃತಿಗಳನ್ನು ಅಮ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿಯ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News