ಪತ್ರಕರ್ತ ಸಂತೋಷ್ ತಮ್ಮಯ್ಯ ವಿರುದ್ದ ಪೊಲೀಸರ ಕ್ರಮ ಸರಿಯಿದೆ: ದಿನೇಶ್ ಗುಂಡೂರಾವ್
Update: 2018-11-14 07:03 GMT
ಬೆಂಗಳೂರು, ನ.14: ದುರುದ್ದೇಶಪೂರ್ವಕವಾಗಿ ಒಂದು ಧರ್ಮದ ವಿರುದ್ಧ ಪ್ರಚೋದನಾಕಾರಿಯಾಗಿ ಮಾತನಾಡಿದ ಪತ್ರಕರ್ತ ಸಂತೋಷ್ ತಮ್ಮಯ್ಯ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳುವುದರಲ್ಲಿ ತಪ್ಪೇನು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡಾರಾವ್ ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದ ಶಾಂತಿಯನ್ನು ಕದಡುವಂತಹ ಕೆಲಸವನ್ನು ಯಾರೇ ಮಾಡಿದರು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.