ರಾಜಸ್ಥಾನ: ಚುನಾವಣೆಗೆ ಕೆಲವೇ ದಿನಗಳ ಮೊದಲು ಬಿಜೆಪಿಗೆ ಮತ್ತೊಂದು ಆಘಾತ

Update: 2018-11-14 08:51 GMT

ಹೊಸದಿಲ್ಲಿ, ನ.14: ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವು ದಿನಗಳಿರುವಂತೆಯೇ ಬಿಜೆಪಿಯ ಪ್ರಭಾವಿ ಸಂಸದರೊಬ್ಬರು ಪಕ್ಷವನ್ನು ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದು, ಕೇಸರಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.

ದೌಸಾದ ಸಂಸದ , ಮಾಜಿ ಪೊಲೀಸ್ ಅಧಿಕಾರಿ ಹರೀಶ್ ಮೀನಾ 2014ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಹರೀಶ್ ಮೀನಾ ಅವರ ನಿರ್ಧಾರದಿಂದ ಬಿಜೆಪಿಗೆ ತೀವ್ರ ಮುಜುಗರವಾಗಿದೆ. “ಈ ಸಮಯದಲ್ಲಿ ಮೀನಾರ ಕಾಂಗ್ರೆಸ್ ಸೇರ್ಪಡೆಯ ನಿರ್ಧಾರದಿಂದ ಸಂತಸಗೊಂಡಿದ್ದೇನೆ.  ಅವರನ್ನು ಕಾಂಗ್ರೆಸ್ ಗೆ ನಾನು ಸ್ವಾಗತಿಸುತ್ತಿದ್ದೇನೆ” ಎಂದು ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಮೀನಾರ ಸಹೋದರ ನಮೋ ನಾರಾಯಣ ಮೀನಾ ಕಾಂಗ್ರೆಸ್ ನಲ್ಲಿದ್ದಾರೆ. ರಾಜಸ್ಥಾನದಲ್ಲಿ ಮೀನಾ ಸಮುದಾಯವು ಬಲಿಷ್ಠವಾಗಿದೆ. ರಾಜಕೀಯ ಮತ್ತು ಸರಕಾರಿ ಕೆಲಸಗಳಲ್ಲೂ ಈ ಸಮುದಾಯದ ಮತದಾರರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News