ಇಂದಿರಾ ಕ್ಯಾಂಟೀನ್‌ನಲ್ಲಿ ಶೀಘ್ರವೇ ಟೀ, ಕಾಫಿ ವ್ಯವಸ್ಥೆ: ಡಾ.ಜಿ. ಪರಮೇಶ್ವರ್

Update: 2018-11-16 09:09 GMT

ಬೆಂಗಳೂರು-, ನ.16: ಇಂದಿರಾ ಕ್ಯಾಂಟೀನ್‌ನಲ್ಲಿ ಕಾಫಿ, ಟೀ ನೀಡಲು ಚಿಂತನೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು,

ಸದ್ಯ ಇಂದಿರಾ ಕ್ಯಾಂಟೀನ್‌ನಲ್ಲಿ  ತಿಂಡಿ,  ಊಟ ನೀಡಲಾಗುತ್ತಿದೆ. ಮುಂದಕ್ಕೆ ಟೀ, ಕಾಫಿ ನೀಡಬೇಕೆಂಬ ಬೇಡಿಕೆ ಬಂದಿದೆ.‌ ಅಂತೆಯೇ ಎಲ್ಲ ಕ್ಯಾಂಟೀನ್‌ನಲ್ಲೂ ಶೀಘ್ರವೇ ಇದನ್ನು ಪ್ರಾರಂಭಿಸಲಾಗುವುದು. ಇನ್ನು ಇದಕ್ಕೆ ದರ ನಿಗದಿ ಮಾಡಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News