ಗಾಂಜಾ ಸೇವನೆಗೆ ಪ್ರಚೋದನೆ ಆರೋಪ: ನಿತ್ಯಾನಂದಗೆ ಸಿಸಿಬಿ ನೋಟಿಸ್

Update: 2018-11-19 16:27 GMT

ಬೆಂಗಳೂರು, ನ.19: ಗಾಂಜಾ ಸೇವನೆ ಮಾಡಿದರೆ ಮುಕ್ತಿ ಸಿಗುತ್ತೆ ಎಂಬ ವಿಡಿಯೋ ಸಂದೇಶ ನೀಡಿರುವ ಆರೋಪದ ಮೇಲೆ ಸಿಸಿಬಿ ಪೊಲೀಸರು ಬಿಡದಿ ಆಶ್ರಮದ ಸ್ವಾಮಿ ನಿತ್ಯಾನಂದಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ನಿತ್ಯಾನಂದ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ವಿಡಿಯೋದಲ್ಲಿ ಗಾಂಜಾ ಸೇವನೆಯಿಂದ ಆಕಾಶದಲ್ಲಿ ತೇಲಬಹುದು ಎಂದು ಹೇಳಿದ್ದರು. ಸ್ವಾಮಿ ನಿತ್ಯಾನಂದ ಗಾಂಜಾ ಅಫೀಮು ಸೇವನೆ ಮಾಡುವಂತೆ ಸಾರ್ವಜನಿಕರಿಗೆ ಪ್ರಚೋದನೆ ಮಾಡಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ನಿತ್ಯಾನಂದ ವಿರುದ್ಧ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಸೋಮವಾರ ಬಿಡದಿ ಆಶ್ರಮಕ್ಕೆ ತೆರಳಿದ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಆಶ್ರಮದಲ್ಲಿ ನಿತ್ಯಾನಂದ ಇಲ್ಲದ ಹಿನ್ನೆಲೆಯಲ್ಲಿ ನಿತ್ಯಾನಂದನ ಶಿಷ್ಯರು ನೋಟಿಸ್ ಸ್ವೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News