ಬೆಂಗಳೂರು: ಯುವಕನ ಕೊಲೆ

Update: 2018-11-21 12:47 GMT

ಬೆಂಗಳೂರು, ನ.21: ಅಪರಿಚಿತ ವ್ಯಕ್ತಿಯೋರ್ವ ಯುವಕನೊಬ್ಬನನ್ನು ಕೊಲೆಗೈದಿರುವ ಘಟನೆ ದೇವನಹಳ್ಳಿ ತಾಲೂಕಿನ ನಲ್ಲೂರಿನಲ್ಲಿ ನಡೆದಿದೆ ಎನ್ನಲಾಗಿದೆ.

ಇಲ್ಲಿನ ಬುದಲೂರು ಗ್ರಾಮದ ಹರೀಶ್(26) ಕೊಲೆಯಾದ ದುರ್ದೈವಿ ಎಂದು ಪೊಲೀಸರು ಗುರುತಿಸಿದ್ದಾರೆ.

8 ತಿಂಗಳ ಹಿಂದೆ ದೇವನಹಳ್ಳಿ ತಾಲೂಕಿನ ಬಿದಲೂರಿನ ನಿವಾಸಿ ಹರೀಶ್, ನಲ್ಲೂರಿನ ಮೀನಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದ. ಮದುವೆ ಬಳಿಕ ನಲ್ಲೂರು ಗ್ರಾಮದಲ್ಲಿ ಹಣದ ಚೀಟಿವೊಂದನ್ನು ಹಾಕಿದ್ದ ಹರೀಶ್, ಪ್ರತಿ ತಿಂಗಳು ಇಲ್ಲಿಗೆ ಬಂದು ಚೀಟಿಗೆ ಹಣ ಕಟ್ಟಿ ಹೋಗುತ್ತಿದ್ದ ಎನ್ನಲಾಗುತ್ತಿದೆ. ಇದೇ ರೀತಿ ಮಂಗಳವಾರವು ಕೂಡ ಚೀಟಿಗೆ ಹಣ ಕಟ್ಟಿ ಹೊರಟಿದ್ದ ಹರೀಶ್ ಅನ್ನು ಅಪರಿಚಿತ ವ್ಯಕ್ತಿಗಳು ಕೊಲೆ ಮಾಡಿ ನಲ್ಲೂರು ಗ್ರಾಮದ ಸೊಸೈಟಿ ಪಕ್ಕದಲ್ಲಿ ಇರುವ ಹೂವಿನ ತೋಟದಲ್ಲಿ ಎಸೆದು ಹೊಗಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ ಬೆಳಗ್ಗೆ ತೋಟದ ಮಾಲಕರು, ಮೃತ ದೇಹವನ್ನು ಕಂಡಾ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಕೊಲೆಯನ್ನು ಹುಡುಗಿ ಕಡೆಯವರೇ ಮಾಡಿದ್ದಾರೆ. ಅವರಿಗೆ ಈ ಮದುವೆ ಇಷ್ಟವಿರಲಿಲ್ಲ ಎಂದು ಆರೋಪ ಕೇಳಿಬಂದಿದ್ದು, ಈ ಸಂಬಂಧ ದೇವನಹಳ್ಳಿ ತಾಲೂಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News