17 ನಿಮಿಷಗಳಲ್ಲಿ ನಾವು ಬಾಬರಿ ಮಸೀದಿಯನ್ನು ಉರುಳಿಸಿದ್ದೇವೆ: ಶಿವಸೇನೆ ನಾಯಕ ಸಂಜಯ್ ರಾವತ್
Update: 2018-11-23 14:48 GMT
ಹೊಸದಿಲ್ಲಿ, ನ.23: ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೆ ತರಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಿವಸೇನೆ ನಾಯಕ ಸಂಜಯ್ ರಾವತ್ , “17 ನಿಮಿಷಗಳಲ್ಲಿ ನಾವು ಬಾಬರಿ ಮಸೀದಿಯನ್ನು ಉರುಳಿಸಿದ್ದೇವೆ. ಕಾನೂನಿಗೆ ಇನ್ನೆಷ್ಟು ಸಮಯ ಬೇಕು?” ಎಂದು ಪ್ರಶ್ನಿಸಿದ್ದಾರೆ.
ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದವರು ದೇಶದಲ್ಲಿ ಸ್ವತಂತ್ರವಾಗಿ ತಿರುಗಾಡಲೂ ಸಹ ಸಾಧ್ಯವಾಗುವುದಿಲ್ಲ ಎಂದೂ ಅವರು ಇದೇ ಸಂದರ್ಭ ಎಚ್ಚರಿಕೆ ನೀಡಿದರು.
“ನಾವು 17 ನಿಮಿಷಗಳಲ್ಲಿ ಬಾಬರಿಯನ್ನು ಉರುಳಿಸಿದ್ದೇವೆ. ಆದರೆ ಕಾಗದಕ್ಕೆ ಈ ಕೆಲಸ ಮಾಡಲು ಎಷ್ಟು ಸಮಯ ಬೇಕಾಗುತ್ತದೆ. ನೀವು ಸುಗ್ರೀವಾಜ್ಞೆಯ ಬಗ್ಗೆ ಮಾತನಾಡುವುದಾದರೆ ರಾಷ್ಟ್ರಪತಿ ಭವನದಿಂದ ಉತ್ತರ ಪ್ರದೇಶದವರೆಗೆ ಬಿಜೆಪಿಯೇ ಇದೆ. ನಿಮಗೆ ಇನ್ನೇನು ಬೇಕು?” ಎಂದವರು ಪ್ರಶ್ನಿಸಿದ್ದಾರೆ.