ಹೊಸದಿಲ್ಲಿ: ಜಪಾನಿ ಪ್ರವಾಸಿಗೆ ಇರಿದು ಲೂಟಿ

Update: 2018-11-26 04:02 GMT

ಹೊಸದಿಲ್ಲಿ, ನ.26: ನೈರುತ್ಯ ದಿಲ್ಲಿಯ ಸಿರಾಸ್‌ಪುರ ಎಂಬಲ್ಲಿ ಜಪಾನಿ ಪ್ರಜೆಯೊಬ್ಬರನ್ನು ಅಪರಿಚಿತರ ಗುಂಪೊಂದು ಹಲವು ಬಾರಿ ಇರಿದು ಅಪಾರ ನಗದು ಲೂಟಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಟಡಯುಕಿ ಕುರಿಹರ ಎಂಬುವವರು ಹಲ್ಲೆಗೊಒಳಗಾದವರು.

ಸಿರಸ್‌ಪುರದ ಗುರುದ್ವಾರದಲ್ಲಿ ಆಯೋಜಿಸಿದ್ದ ಗುರುನಾನಕ್ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಎರಡು ತಿಂಗಳ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಅವರು ಮೂರು ದಿನಗಳ ಹಿಂದೆಯಷ್ಟೇ ರಾಜಧಾನಿ ತಲುಪಿದ್ದರು. ಪ್ರವಾಸಿಗೆ ಹಲವು ಬಾರಿ ಇರಿದ ನಾಲ್ಕು ಮಂದಿಯ ತಂಡ ಅವರ ಮೊಬೈಲ್ ಫೋನ್ ಮತ್ತು ನಗದು ಅಪಹರಿಸಿದೆ ಎಂದು ವಿವರಿಸಿದ್ದಾರೆ.

ಪ್ರವಾಸಿಗೆ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News