ರೌಡಿಶೀಟರ್ ನಿಂದ ಸಹೋದರನ ಪತ್ನಿ, ಪುತ್ರಿಗೆ ಹಲ್ಲೆ: ಆರೋಪ

Update: 2018-11-27 14:03 GMT

ಬೆಂಗಳೂರು, ನ.27: ಸಹೋದರನ ಪತ್ನಿ, ಪುತ್ರಿಯ ಮೇಲೆ ರೌಡಿಶೀಟರ್ ನಾಗ ಯಾನೆ ನಾಗರಾಜ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ನಗರದ ಶ್ರೀರಾಂಪುರದಲ್ಲಿ ತನ್ನ ಸಹೋದರನ ಪತ್ನಿ ಚಾಮುಂಡೇಶ್ವರಿ, ಪುತ್ರಿ ಶ್ವೇತಾ ಎಂಬುವರ ಮೇಲೆ ನಾಗರಾಜ್ ಹಲ್ಲೆ ನಡೆಸಿದ್ದಾರೆಂದು ಇಲ್ಲಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

ಚಾಮುಂಡೇಶ್ವರಿ, ಈಕೆಯ ಪುತ್ರಿ ಶ್ವೇತಾ ಮೇಲೆ ರೌಡಿಶೀಟರ್ ನಾಗ ಹಾಗೂ ಮಕ್ಕಳು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ರವಿವಾರ, ಏಕಾಏಕಿ ಸಹೋದರನ ಮನೆಗೆ ನುಗ್ಗಿದ ನಾಗರಾಜ್ ಮತ್ತು ಆತನ ಪುತ್ರರು, ಚಾಮುಂಡೇಶ್ವರಿ ಹಾಗೂ ಪುತ್ರಿ ಶ್ವೇತಾ ಮೇಲೆ ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಇವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

ಆಸ್ತಿ ವಿಚಾರವಾಗಿ ಸಹೋದರನ ಪತ್ನಿ, ಪುತ್ರಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ನಾಗರಾಜ್ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News