ಬಿಜೆಪಿ ನಾಯಕರ ಅಹಂಕಾರ, ಕಳಪೆ ಸಾಮರ್ಥ್ಯ ಸೋಲಿಗೆ ಕಾರಣ: ಶತ್ರುಘ್ನ ಸಿನ್ಹಾ

Update: 2018-12-11 18:06 GMT

ಹೊಸದಿಲ್ಲಿ, ಡಿ. 11: ವಿಧಾನ ಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಜಯ ಗಳಿಸಿರುವ ಕಾಂಗ್ರೆಸ್ ಅನ್ನು ಅಭಿನಂದಿಸಿರುವ ಶತ್ರುಘ್ನ ಸಿನ್ಹಾ, ತನ್ನ ಪಕ್ಷ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಅವಕಾಶ ಕಳೆದುಕೊಂಡಿಲ್ಲ. ಬಿಜೆಪಿ ನಾಯಕರ ಅಹಂಕಾರ, ಕಳಪೆ ಸಾಮರ್ಥ್ಯ ಹಾಗೂ ಮಹತ್ವಾಕಾಂಕ್ಷೆ ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಸೋಲಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

‘‘ನಾನು ಬಿಜೆಪಿಗೆ ರಾಜೀನಾಮೆ ನೀಡಲಾರೆ. ಅದು ಬಯಸಿದರೆ ನನ್ನನ್ನು ಪಕ್ಷದಿಂದ ಹೊರಗೆ ಹಾಕಲಿ’’ ಎಂದು ಹೇಳಿರುವ ಶತ್ರುಘ್ನ ಸಿನ್ನಾ ‘‘ನನ್ನ ಮತ್ತು ಪಕ್ಷದ ಸಂಬಂಧ ಹುಳಿ ಮತ್ತು ಸಿಹಿಯಂತೆ’’ ಎಂದು ವಿವರಿಸಿದ್ದಾರೆ. ‘‘ಅಸಮಾಧಾನ ಪ್ರಜಾಪ್ರಭುತ್ವದ ಸುರಕ್ಷಾ ಕವಾಟ, ಬಿಜೆಪಿಯಲ್ಲಿ ಆ ಪಾತ್ರ ನಿರ್ವಹಿಸುತ್ತಿರುವ ಓರ್ವ ವ್ಯಕ್ತಿ ನಾನು’’ ಎಂದು ಅವರು ಹೇಳಿದ್ದಾರೆ. ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ಬಿಜೆಪಿ ಪ್ರಜಾಪ್ರಭುತ್ವದ ಅವಕಾಶ ಸವಿಯಿತು. ಆದರೆ, ಪ್ರಸಕ್ತ ಸರಕಾರ ನೋಟು ನಿಷೇಧದಂತಹ ನಿರ್ಧಾರವನ್ನು ರಹಸ್ಯವಾಗಿ ಹಾಗೂ ಅದರ ಅನುಷ್ಠಾನವನ್ನು ಮಧ್ಯರಾತ್ರಿ ಮಾಡಿದೆ ಎಂದು ಶತ್ರುಘ್ನ ಸಿನ್ಹಾ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News