ಅಕ್ರಮ ಕುದುರೆ ರೇಸ್ ಜೂಜಾಟ ಅಡ್ಡೆಗೆ ದಾಳಿ: 10 ಜನರ ಬಂಧನ

Update: 2018-12-12 14:31 GMT

ಬೆಂಗಳೂರು, ಡಿ.12: ಟರ್ಫ್‌ಕ್ಲಬ್‌ನಲ್ಲಿ ಕಾನೂನು ಬಾಹಿರವಾಗಿ ಕುದುರೆ ರೇಸ್ ಜೂಜಾಟ ಆಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿ 10 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿ ಬಸು(43), ಅಂಜಿನಪ್ಪ(40), ವಿನೋದ್ ಕುಮಾರ್(29), ಕಬೀರ್ ಅಹಮದ್(41), ನವಾಜ್ ಅಹ್ಮದ್‌ ಖಾನ್(48), ಹರೀಶ್(50), ತಿಮ್ಮರಾಜು(52), ಅಜಯ್ ಕುಮಾರ್(37), ಲಿಯಾಕತ್(52) ಹಾಗೂ ಕೇಶವ(35) ಬಂಧಿತ ಜೂಜುಕೋರರಾಗಿದ್ದು, ಇವರ ಬಳಿಯಿಂದ 5.91 ಲಕ್ಷ ರೂ. ಹಣ ವಶಪಡಿಸಿಕೊಳ್ಳಲಾಗಿದೆ.

ಟರ್ಫ್ ಕ್ಲಬ್‌ನ 3ನೇ ಗೇಟ್ ಬಳಿಯ 1ನೇ ಎನ್‌ಕ್ಲೋಸರ್ಸ್‌ ಒಳಗೆ ಕಾನೂನುಬಾಹಿರವಾಗಿ ಕುದುರೆ ರೇಸ್ ಬೆಟ್ಟಿಂಗ್ ಆಡುತ್ತಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News