ಡಿ.15ಕ್ಕೆ ಪಿ.ಬಿ.ಶ್ರೀನಿವಾಸ್ ಕುರಿತ ಕೃತಿ ಬಿಡುಗಡೆ

Update: 2018-12-12 17:19 GMT

ಬೆಂಗಳೂರು, ಡಿ.12: ತೆಲಗು ವಿಜ್ಞಾನ ಸಮಿತಿ ವತಿಯಿಂದ ಡಾ.ಪಿ.ಬಿ.ಶ್ರೀನಿವಾಸ್ ಕುರಿತ ಕೃತಿ ಬಿಡುಗಡೆ ಸಮಾರಂಭವನ್ನು ಡಿ.15ರಂದು ಸಂಜೆ 5ಗಂಟೆಗೆ ವೈಯ್ಯಲಿಕಾವಲ್‌ನ ಶ್ರೀಕೃಷ್ಣ ದೇವರಾಯ ಕಲಾಮಂದಿರದಲ್ಲಿ ಆಯೋಜಿಸಿದೆ.

ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೆಲಗು ವಿಜ್ಞಾನ ಸಮಿತಿ ಅಧ್ಯಕ್ಷ ಡಾ.ಎ.ರಾಧಾಕೃಷ್ಣ ರಾಜು, ಡಾ.ರಂಗನಾಥ ನಂದ್ಯಾಲ ಖ್ಯಾತ ಗಾಯಕ ಡಾ.ಪಿ.ಬಿ.ಶ್ರೀನಿವಾಸ್‌ರವರ ಕುರಿತ ಕೃತಿಯನ್ನು ಆಂಗ್ಲ ಭಾಷೆಯಲ್ಲಿ ರಚಿಸಿದ್ದು, ನಟ ಶ್ರೀನಾಥ್ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News