ರಾಷ್ಟ್ರ ರಾಜಕಾರಣದತ್ತ ಕಣ್ಣು: ಪುತ್ರನಿಗೆ ಕಾರ್ಯಾಧ್ಯಕ್ಷ ಪಟ್ಟ ಕಟ್ಟಿದ ಕೆಸಿಆರ್

Update: 2018-12-14 07:21 GMT

ಹೈದರಾಬಾದ್, ಡಿ.14: ರಾಷ್ಟ್ರ ರಾಜಕಾರಣದತ್ತ ಗಮನ ನೀಡಲು ಬಯಸಿರುವ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಶುಕ್ರವಾರ ತಮ್ಮ ಪುತ್ರ ಟಿ.ರಾಮರಾವ್‌ರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

ರಾಷ್ಟ್ರೀಯ ರಾಜಕೀಯದಲ್ಲಿ ತಾನು ಮಹತ್ವದ ಪಾತ್ರ ನಿಭಾಯಿಸಬೇಕಾದ ಸಂದರ್ಭ ಬಂದಾಗ ಮಗನಿಗೆ ಮುಖ್ಯಮಂತ್ರಿ ಪಟ್ಟಕ್ಕೇರಿಸಲು ಕೆಸಿಆರ್ ಇಟ್ಟಿರುವ ಮೊದಲ ಹೆಜ್ಜೆ ಇದಾಗಿದೆ ಎನ್ನಲಾಗಿದೆ.

ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರಿರುವ ರಾವ್ ನಿರ್ಧಾರಕ್ಕೆ ಪಕ್ಷದಲ್ಲಿ ಅಪಸ್ವರ ಇಲ್ಲವಾಗಿದೆ.

ತಾನು ಶೀಘ್ರವೇ ಕಾಂಗ್ರೇಸೇತರ ಹಾಗೂ ಬಿಜೆಪಿಯೇತರ ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡ ಮೂರನೇ ರಂಗವನ್ನು ರಚಿಸುವುದಾಗಿ ಮಂಗಳವಾರ ಕೆಸಿಆರ್ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News