ಆನೆ ದಂತ ಮಾರಾಟ: ಇಬ್ಬರ ಬಂಧನ

Update: 2018-12-24 18:37 GMT

ಬೆಂಗಳೂರು, ಡಿ.24: ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಇಬ್ಬರನ್ನು ಇಲ್ಲಿನ ಕೊಡಿಗೇಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಆನಬಾಳು ಹೋಬಳಿ ಮಾರನಹಳ್ಳಿ ಗ್ರಾಮದ ಎಂ.ಬಿ.ನಾಗೇಶ್(48) ಹಾಗೂ ಹರಳಹಳ್ಳಿ ಗ್ರಾಮದ ಎಚ್.ಜಿ. ಪ್ರತಾಪ್(27) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ 15 ಕೆಜಿ ತೂಕದ ಎರಡು ಆನೆ ದಂತಗಳನ್ನು ಜಪ್ತಿ ಮಾಡಿದ್ದು, ಸಕಲೇಶಪುರ ಅರಣ್ಯದಲ್ಲಿ ಮೃತಪಟ್ಟಿದ್ದ ಆನೆಯ ದಂತಗಳನ್ನು ತೆಗೆದುಕೊಂಡು, ನಗರದಲ್ಲಿ ಮಾರಾಟ ಮಾಡಲು ಬಂದಿರುವುದಾಗಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News