ಬೆಂಗಳೂರು: ಜ.22 ರಿಂದ ನಗರದ ಹಲವೆಡೆ ನೀರು ವ್ಯತ್ಯಯ

Update: 2019-01-20 15:54 GMT

ಬೆಂಗಳೂರು, ಜ. 20: ಬೆಂಗಳೂರು ಜಲಮಂಡಳಿಯ ಕಾವೇರಿ ನೀರು ಸರಬರಾಜು ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಜ.22ರ ರಾತ್ರಿ 10 ಗಂಟೆಯಿಂದ ಜ.23ರ ಸಂಜೆ 4 ಗಂಟೆಯ ವರೆಗೂ ನಗರದ ಹಲವು ಪ್ರದೇಶಗಳಲ್ಲಿ ನೀರು ವ್ಯತ್ಯಯವಾಗಲಿದೆ.

ಪ್ರಮುಖ ಪ್ರದೇಶಗಳು: ಜಯನಗರ, ಜೆ.ಪಿ.ನಗರ, ಬಸವನಗುಡಿ, ಯಶವಂತಪುರ, ಮಲ್ಲೇಶ್ವರಂ, ವಸಂತನಗರ, ಸದಾಶಿವನಗರ, ಶಿವಾಜಿನಗರ, ಮೆಜೆಸ್ಟಿಕ್, ಮಡಿವಾಳ, ಕೆ.ಆರ್.ಮಾರುಕಟ್ಟೆ, ಬನಶಂಕರಿ, ಚಾಮರಾಜಪೇಟೆ, ಇಂದಿರಾನಗರ, ಶಾಂತಿನಗರ, ವಿಜಯನಗರ, ಎ.ಜಿ.ರಸ್ತೆ, ಕೋರಮಂಗಲ, ಬಾಪೂಜಿನಗರ, ಮೈಸೂರು ರಸ್ತೆ ಆಡುಗೋಡಿ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News