ರಾಜ್ಯಾದ್ಯಂತ ಮದ್ಯ ನಿಷೇಧಕ್ಕೆ ಒತ್ತಾಯ: ವಿಧಾನಸೌಧದತ್ತ ಮಹಿಳೆಯರ 'ಬೆಂಗಳೂರು ಚಲೋ' ಪಾದಯಾತ್ರೆ

Update: 2019-01-30 08:01 GMT

ಬೆಂಗಳೂರು, ಜ. 30: ಕರ್ನಾಟಕದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಸಾವಿರಾರು ಮಹಿಳೆಯರ ನೇತೃತ್ವದಲ್ಲಿ ಚಿತ್ರದುರ್ಗದಿಂದ 'ಬೆಂಗಳೂರು ಚಲೋ' ಪಾದಯಾತ್ರೆ ಬುಧವಾರ ಇಲ್ಲಿನ ಮಲ್ಲೇಶ್ವರದ ಕ್ರೀಡಾಂಗಣದಿಂದ ವಿಧಾನಸೌಧದ ಕಡೆಗೆ ಆರಂಭಿಸಿದ್ದಾರೆ.

ಹೋರಾಟಗಾರ್ತಿ ಅರುಂಧತಿ ನಾಗ್, ಹಿರಿಯ ರಂಗಕರ್ಮಿ ಪ್ರಸನ್ನ, ಲೇಖಕಿ ಡಾ.ವಿಜಯಮ್ಮ, ಆಂದೋಲನದ ಮುಖ್ಯಸ್ಥೆ ಸ್ವರ್ಣ ಭಟ್, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಸೇರಿದಂತೆ ಇತರರು ಪಾದಯಾತ್ರೆಯಲ್ಲಿ ಉಪಸ್ಥಿತರಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಸುಮಾರು 5 ಸಾವಿರಕ್ಕೂ ಅಧಿಕ ಮಹಿಳೆಯರೂ ಪಾಲ್ಗೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News