ದೇಶಕ್ಕಾಗಿ ನನ್ನ ಇನ್ನೊಬ್ಬ ಪುತ್ರನನ್ನೂ ತ್ಯಾಗ ಮಾಡಲು ಸಿದ್ಧನಿದ್ದೇನೆ: ಹುತಾತ್ಮ ಯೋಧನ ತಂದೆ

Update: 2019-02-15 11:17 GMT

ಹೊಸದಿಲ್ಲಿ, ಫೆ.15: “ದೇಶಕ್ಕಾಗಿ ನನ್ನ ಇನ್ನೊಬ್ಬ ಪುತ್ರನನ್ನೂ ತ್ಯಾಗ ಮಾಡಲು ಸಿದ್ಧನಿದ್ದೇನೆ”… ಇದು ನಿನ್ನೆ ಪುಲ್ವಾಮದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ ರತನ್ ಠಾಕೂರ್ ರ ತಂದೆಯ ಮಾತು.

“ದೇಶಕ್ಕಾಗಿ ಹೋರಾಡಲು ನಾನು ಇನ್ನೊಬ್ಬ ಪುತ್ರನನ್ನೂ ಕಳುಹಿಸುತ್ತೇನೆ. ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಬೇಕಾಗಿದೆ” ಎಂದು ಭಾವುಕರಾಗಿ ಅವರು ಹೇಳುತ್ತಾರೆ.

ಗುರುವಾರ ಜೈಶ್ ಉಗ್ರನೋರ್ವ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಸುಮಾರು 350 ಕೆ.ಜಿ. ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಬಸ್ ಗೆ ಢಿಕ್ಕಿ ಹೊಡೆಸುವ ಮೂಲಕ ಈ ಭೀಕರ ದಾಳಿ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News