ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚಾರ್ ವಿರುದ್ಧ ಲುಕ್ ಔಟ್ ಸುತ್ತೋಲೆ

Update: 2019-02-22 06:13 GMT

ಹೊಸದಿಲ್ಲಿ, ಫೆ.22: ಬ್ಯಾಂಕ್ ಗೆ ಕೋಟ್ಯಂತರ ರೂಪಾಯಿ ವಂಚಿದ  ಪ್ರಕರಣದಲ್ಲಿ ಸಿಲುಕಿಕೊಂಡಿರುವ ಐಸಿಐಸಿಐ ಬ್ಯಾಂಕ್ ನ  ಮಾಜಿ ಆಡಳಿತ ನಿರ್ದೇಶಕಿ  ಮತ್ತು ಸಿಇಓ ಚಂದಾ ಕೊಚ್ಚಾರ್, ಆಕೆಯ ಪತಿ ದೀಪಕ್ ಕೊಚ್ಚಾರ್  ಮತ್ತು ವಿಡಿಯೋಕೊನ್ ಸಂಸ್ಥೆಯ ಎಂಡಿ ವೇಣುಗೋಪಾಲ್ ಧೋತ್  ವಿರುದ್ಧ ಸಿಬಿಐ ಲುಕ್ ಔಟ್ ಸುತ್ತೋಲೆ ಹೊರಡಿಸಿದೆ.

ಉದ್ಯಮಿ ವಿಜಯ್ ಮಲ್ಯ ಬ್ಯಾಂಕ್ ಗಳಿಗೆ ಕೋಟಿಗಟ್ಟಲೆ ರೂ. ಸಾಲ ಮರು ಪಾವತಿಸದೆ ಲಂಡನ್ ಗೆ ಪರಾರಿಯಾಗಿರುವಂತೆ ಚಂದಾ ಮತ್ತು ಇತರರು ದೇಶ ಬಿಟ್ಟು ಪರಾರಿಯಾಗುವುದನ್ನು  ತಡೆಯಲು ಸಿಬಿಐ ಲುಕ್ ಔಟ್ ಸುತ್ತೋಲೆ ಹೊರಡಿಸಿದೆ.

ಎಲ್ಲ ವಿಮಾನ ನಿಲ್ದಾಣಗಳಲ್ಲೂ ಚಂದಾ ಮತ್ತು ಇತರರಿಗೆ ವಿದೇಶಕ್ಕೆ ವಿಮಾನದಲ್ಲಿ ಪರಾರಿಯಾಗುವ ಅವಕಾಶವನ್ನು ಸಿಬಿಐ ಬಂದ್ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News