ನಗುತ್ತಾ ಬಂದ ಶಾಸಕ ಶಿವನಗೌಡ ನಾಯಕ್: ತರಾಟೆ ತೆಗೆದುಕೊಂಡ ಕೋರ್ಟ್

Update: 2019-03-15 16:43 GMT

ಬೆಂಗಳೂರು, ಮಾ.15: ದೇವದುರ್ಗಾ ಶಾಸಕ ಶಿವನಗೌಡ ನಾಯಕ್ ಶುಕ್ರವಾರ ವಿಚಾರಣೆಗಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ಹಾಜರಾದರು. ಆದರೆ ಎಲ್ಲರಿಗೂ ನಮಸ್ಕರಿಸಿ ನಗುತ್ತಲೇ ಕೋರ್ಟ್ ಒಳಗೆ ಶಿವನಗೌಡ ನಾಯಕ್ ಹೋಗಿದ್ದು, ಕೋಪಗೊಂಡ ನ್ಯಾಯಾಧೀಶರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನ್ಯಾಯಲಯವನ್ನ ಏನಂತ ಅನ್ಕೊಂಡಿದ್ದಿರಾ? ನೀವೊಬ್ಬ ಶಾಸಕರಾಗಿ ನ್ಯಾಯಾಲಯದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಪರಿಜ್ಞಾನ ಇಲ್ಲವೇ ಎಂದು ನ್ಯಾ.ರಾಮಚಂದ್ರ ಹುದ್ದರ್, ಶಿವನಗೌಡ ನಾಯಕ್‌ರನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಶಿವನಗೌಡ ಪರ ವಕೀಲರು ಮಧ್ಯ ಪ್ರವೇಶ ಮಾಡಿ ನ್ಯಾಯಾಧೀಶರ ಎದುರು ಕ್ಷಮೆ ಕೇಳುವಂತೆ ಸಲಹೆ ಮಾಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ 2008 ರಿಂದ 2013ರವರೆಗೆ ಪುಸ್ತಕ ಖರೀದಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹೇಳಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News