ನಾಪತ್ತೆಯಾಗಿದ್ದ ಫೈನಾನ್ಸ್ ಕಲೆಕ್ಟರ್ ಶವವಾಗಿ ಪತ್ತೆ

Update: 2019-03-15 17:06 GMT

ಬೆಂಗಳೂರು, ಮಾ.15: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಫೈನಾನ್ಸ್ ಕಲೆಕ್ಟರ್ ಮೃತದೇಹ ಆತ ವಾಸವಿದ್ದ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಉದಯನಗರದ ಮನೆಯ ಹೊರಭಾಗದ ಸಂದಿಯಲ್ಲಿ ಅನುಮಾನಾಸ್ಪದವಾಗಿ ಕಂಡುಬಂದಿದೆ.

ಕೆಜಿಎ್ನ ಸುರೇಶ್(24) ಮೃತ ಫೈನಾನ್ಸ್ ಕಲೆಕ್ಟರ್ ಎಂದು ತಿಳಿದುಬಂದಿದೆ.

ಒಂದೂವರೆ ವರ್ಷದಿಂದ ಉದಯನಗರ ಗಣೇಶ ದೇವಾಲಯ ಹಿಂಭಾಗದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಆದರೆ, ಸುರೇಶ್ ಸಂಗ್ರಹ ಮಾಡುತ್ತಿದ್ದ ಫೈನಾನ್ಸ್ ಹಣದ ವ್ಯವಹಾರದಲ್ಲಿ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನ್ನ ಮೊಬೈಲ್ ಸೇರಿದಂತೆ ಎಲ್ಲ ವಸ್ತುಗಳನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದ ಎನ್ನಲಾಗಿದೆ.

ಹೀಗೆ ಎರಡು ದಿನಗಳಾದರೂ ಈತನ ಸುಳಿವು ಸಿಗದ ಕಾರಣ ಜೊತೆಯಿದ್ದವರು ಪೊಲೀಸ್ ಠಾಣೆಗೆ ದೂರು ನೀಡಬೇಕು ಎನ್ನುವಷ್ಟರಲ್ಲಿ ಗುರುವಾರ ಅಕ್ಕಪಕ್ಕದ ಮನೆಯವರಿಗೆ ಕೊಳೆತ ದೇಹದ ವಾಸನೆ ಬಂದಿದೆ. ಆಗ ಮನೆಗಳ ಸಂದಿಯಲ್ಲಿ ನೋಡಿದಾಗ ಈತನ ಮೃತ ದೇಹ ಕಂಡುಬಂದಿದೆ. ವಿಷಯ ತಿಳಿದ ಮಹದೇವಪುರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಾಯದಿಂದ ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News