ಅನಿವಾಸಿ ಭಾರತೀಯರಿಂದ ‘ಚಾಯ್ ಪೇ ಚರ್ಚಾ’

Update: 2019-03-16 14:25 GMT

ಬೆಂಗಳೂರು, ಮಾ.16: ಕುವೈತ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ಕೋರಲು ‘ಚಾಯ್ ಪೇ ಚರ್ಚಾ’ ಆಯೋಜನೆ ಮಾಡುತ್ತಿದ್ದಾರೆ.

ಕರ್ನಾಟಕ ಕುವೈಟ್ ಪ್ರವಾಸಿ ಭಾರತೀಯ ಸಂಯೋಜಕ ನಟೇಶ್ ಪ್ರಕಾರ ಇಲ್ಲಿನ ಭಾರತೀಯರಲ್ಲಿ ನರೇಂದ್ರಮೋದಿ ಪರ ಅತ್ಯುತ್ಸಾಹದಿಂದ ಪ್ರಚಾರ ಮಾಡಲು ಮುಂದೆ ಬರುತ್ತಿದ್ದಾರೆ. ಪ್ರತಿ ಶುಕ್ರವಾರ ಈ ರೀತಿಯ ಕಾರ್ಯಕ್ರಮಗಳನ್ನು ಕೈಗೊಂಡು ಮೋದಿ ಪರ ಜನಾಭಿಪ್ರಾಯವನ್ನು ಮೂಡಿಸಲಾಗುವುದು.

ಮುಂದಿನ ಶುಕ್ರವಾರ ರಾಜ್ಯದ ಜನ ‘ಚಾಯ್ ಪೇ ಚರ್ಚಾ’ದಲ್ಲಿ ಭಾಗವಹಿಸಲಿದ್ದಾರೆ. ಮತದಾನ ಮಾಡಲು ಭಾರತಕ್ಕೆ ಬರುವವರಿಗೆ ಸಹಾಯವನ್ನು ಮಾಡಲು ನಿರ್ಧರಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News