ವಿಶೇಷಚೇತನ ಮಕ್ಕಳನ್ನು ಕೊಲೆಗೈದು, ಆತ್ಮಹತ್ಯೆಗೆ ಶರಣಾದ ತಾಯಿ

Update: 2019-03-16 14:56 GMT

ಬೆಂಗಳೂರು, ಮಾ.16: ಜೀವನದಲ್ಲಿ ಜಿಗುಪ್ಸೆಗೊಂಡ ತಾಯಿ ತನ್ನ ಇಬ್ಬರು ವಿಶೇಷಚೇತನ ಮಕ್ಕಳಿಗೆ ವಿಷವುಣಿಸಿ ತಾನೂ ಸಹ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ದೊಡ್ಡತೇಗೂರು ಗ್ರಾಮದಲ್ಲಿ ನಡೆದಿದೆ.

ರಾಧಮ್ಮ(50) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯಾಗಿದ್ದು, ಈಕೆಯ ಮಕ್ಕಳಾದ ಹರೀಶ್(28), ಸಂತೋಷ್(25) ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಕಳೆದ ಇಪ್ಪತ್ತು ವರ್ಷಗಳ ಹಿಂದೆ ತಮಿಳುನಾಡಿನ ದೇವರಬೆಟ್ಟದ ಪಕ್ಕದ ಗೋಪಸಂದ್ರ ನಿವಾಸಿ ದಶರಥ ರೆಡ್ಡಿ(ರಾಧಮ್ಮ ಪತಿ) ಇಡೀ ಕುಟುಂಬವನ್ನು ಬೀದಿಪಾಲು ಮಾಡಿ ಮನೆ ಬಿಟ್ಟು ಹೋಗಿದ್ದ. ಅಂದಿನಿಂದ ಇಬ್ಬರು ಅಂಗವಿಕಲ ಗಂಡು ಮಕ್ಕಳನ್ನು ಸಾಕಿ ಸಲಹಿ ಬಳಲಿದ್ದ ತಾಯಿ ರಾಧಮ್ಮ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನಿಬ್ಬರು ಮಕ್ಕಳಿಗೆ ವಿಷವಿಟ್ಟು ತಾನೂ ವಿಷ ಕುಡಿದು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿಯ ವೃತ್ತ ನಿರೀಕ್ಷಕರಾದ ಕೆ.ವಿಶ್ವನಾಥ್ ಆಗಮಿಸಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News