"ಚುನಾವಣೆಗೆ ಸ್ಪರ್ಧಿಸುತ್ತೇನೆ, ಒಂದು ರೂ. ನೀಡಿ"

Update: 2019-03-18 17:00 GMT

ಬೆಂಗಳೂರು, ಮಾ.18: ಮುಂದಿನ ತಿಂಗಳು ನಡೆಯಲ್ಲಿರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದು, ಅಭ್ಯರ್ಥಿ ಠೇವಣಿ 25,000 ರೂ.ಗಳನ್ನು ಇಡಲು 1 ರೂ.ನ್ನು ನೀಡಿ ಅನುಮತಿಸಿ ಎಂದು ವೇಣುಗೋಪಾಲ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ 30 ಸಾವಿರ ಮತದಾರರ ಒಪ್ಪಿಗೆ ಪಡೆದು ನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಹೀಗಾಗಿ, ನನಗೆ ಒಪ್ಪಿಗೆ ನೀಡಬೇಕಾದರೆ ಫೋನ್ ಪೇ, ಗೂಗಲ್ ಪೇ ಹಾಗೂ ಪೇಟಿಎಂ ಮೂಲಕ ಒಂದು ರೂಪಾಯಿಯನ್ನು (9632179514 ವೇಣುಗೋಪಾಲ್) ಇಲ್ಲಿಗೆ ವರ್ಗಾಯಿಸಬಹುದು ಎಂದು ವಿನಂತಿಸಿದರು.

ರಾಜ್ಯದಲ್ಲಿ ಯುವಕರಿಗೋಸ್ಕರ ಯುವ ಕರ್ನಾಟಕ ಪಕ್ಷ ಎಂಬ ರಾಜಕೀಯ ಪಕ್ಷವನ್ನು ನೋಂದಣಿ ಮಾಡಿಸುತ್ತಿದ್ದು ನೋಂದಣಿ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News