ಚಾಮರಾಜಪೇಟೆಯಲ್ಲಿ ಮತಯಾಚಿಸಿದ ನಟ ಪ್ರಕಾಶ್‌ ರೈ

Update: 2019-03-18 17:58 GMT

ಬೆಂಗಳೂರು, ಮಾ.18: ಪ್ರಕಾಶ್‌ ರೈ ರವರು ಸೋಮವಾರ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಚಲವಾದಿ ಪಾಳ್ಯ ವಾರ್ಡಿನ ಭಕ್ಷಿ ಗಾರ್ಡನ್ ಪ್ರದೇಶದಲ್ಲಿ ತಮ್ಮ ಮತ ಯಾಚನೆಯನ್ನು ಮನೆಮನೆಗೆ ತೆರಳಿ ನಡೆಸಿದರು.

ನೆರೆದಿದ್ದ ಪ್ರದೇಶವಾಸಿಗಳಲ್ಲಿ ಅಭೂತಪೂರ್ವವಾದಂತಹ ಸ್ವಾಗತವನ್ನು ಕೋರುವ ಮೂಲಕ ಪ್ರಕಾಶ್ ರಾಜ್‌ರವರಿಗೆ ತಮ್ಮ ಮತ ಬೆಂಬಲವನ್ನು ನೀಡಿದರು. ಪ್ರಕಾಶ್‌ ರಾಜ್ ಅವರು ಮಾತನಾಡುತ್ತಾ, ನೂರು ವರ್ಷಗಳಿಂದಲೂ ಹೆಚ್ಚು ಕಾಲದಿಂದ ವಾಸಿಸುತ್ತಿರುವ ಇಲ್ಲಿನ ಪ್ರದೇಶ ವಾಸಿಗಳಿಗೆ ಸರಕಾರವು ಹಕ್ಕುಪತ್ರಗಳನ್ನು ನೀಡದೆ ವಂಚಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.

ಈ ಪ್ರಶ್ನೆಯನ್ನು ಮುಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ಚರ್ಚಿಸಬೇಕಾದಂತಹ ಜನಸಾಮಾನ್ಯನ ಅಗತ್ಯ ತಕ್ಷಣಕ್ಕೆ ಇದೆ ಎಂಬ ಅಂಶವನ್ನು ಪ್ರತಿಪಾದಿಸುವ ಮೂಲಕ ಮತ್ತು ಅಲ್ಲಿನ ಪ್ರದೇಶ ವಾಸಿಗಳು ಅನೇಕ ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುತ್ತಾ ಬದಲಾವಣೆಯ ಪರ್ವಕ್ಕಾಗಿ ತಮ್ಮ ಅಗತ್ಯವನ್ನು ಒತ್ತಿ ಹೇಳುವ ಮೂಲಕ ತಮ್ಮ ಮತ ಭಿಕ್ಷೆಯನ್ನು ಬೇಡಿದರು. ನೆರೆದಿದ್ದ ನೂರಾರು ಪ್ರದೇಶ ವಾಸಿಗಳು ಮುಂಬರುವ ಚುನಾವಣೆಯಲ್ಲಿ ತಮಗೆ ನಮ್ಮ ಮತ ಗಳೆಲ್ಲವನ್ನೂ ಹಾಕುತ್ತೇವೆ ಎಂಬ ಭರವಸೆಯನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News