ವಿಮರ್ಶಾ ಪ್ರಶಸ್ತಿ, ಗಣ್ಯ ಲೇಖಕಿ ಪ್ರಶಸ್ತಿ ಪ್ರಕಟ

Update: 2019-04-01 18:29 GMT

ಬೆಂಗಳೂರು, ಎ.1: ಬಿಎಂಶ್ರೀ ಪ್ರತಿಷ್ಠಾನದ ಸೂ.ವೆಂ.ಆರಗ ವಿಮರ್ಶಾ ಪ್ರಶಸ್ತಿಗೆ ಡಾ.ಸುರೇಶ್ ನಾಗಲಮಡಿಕೆ ಹಾಗೂ ಡಾ.ವಿಜಯಾ ಸುಬ್ಬರಾಜ್ ಗಣ್ಯ ಲೇಖಕಿ ಪ್ರಶಸ್ತಿಗೆ ಲಲಿತಾ ಸಿದ್ಧಬಸವಯ್ಯ ಆಯ್ಕೆಯಾಗಿದ್ದಾರೆ.

ಸೂ.ವೆಂ.ಆರಗ ವಿಮರ್ಶಾ ಪ್ರಶಸ್ತಿಗೆ ಡಾ.ಎಚ್.ಎಸ್.ಮಾಧವರಾಮ್ ಮತ್ತು ಡಾ.ಕೆ.ಪಿ.ಭಟ್ ಅವರನ್ನೊಳಗೊಂಡ ಆಯ್ಕೆ ಸಮಿತಿ 2018ರಲ್ಲಿ ಪ್ರಕಟವಾದ ಡಾ.ಸುರೇಶ್ ನಾಗಲಮಡಿಕೆ ಅವರ ಹಲವು ಬಣ್ಣದ ಹಗ್ಗ ಕೃತಿಯನ್ನು ಆಯ್ಕೆ ಮಾಡಿದ್ದು, 2019ರ ಡಾ.ವಿಜಯಾ ಸುಬ್ಬರಾಜ್ ಗಣ್ಯ ಲೇಖಕಿ ಪ್ರಶಸ್ತಿಗೆ ಚಿಂತಾಮಣಿ ಕೊಡ್ಲೆಕೆರೆ ಮತ್ತು ಎಚ್.ಎಲ್.ಪುಷ್ಪ ಅವರನ್ನೊಳಗೊಂಡ ಆಯ್ಕೆ ಸಮಿತಿ ಲಲಿತಾ ಸಿದ್ಧಬಸವಯ್ಯ ಅವರ ಕಾವ್ಯ ಕ್ಷೇತ್ರದಲ್ಲಿನ ಕೊಡುಗೆಗಾಗಿ ಆಯ್ಕೆ ಮಾಡಿದೆ.

ಎರಡು ಪ್ರಶಸ್ತಿಗಳು ತಲಾ 10 ಸಾವಿರ ರೂ. ನಗದು ಹಾಗೂ ಸ್ಮರಣಿಕೆಗಳ ನ್ನೊಳಗೊಂಡಿದೆ. ಏ.11ರಂದು ಗುರುವಾರ ಸಂಜೆ 5.30ಕ್ಕೆ ಬಿಎಂಶ್ರೀ ಪ್ರತಿಷ್ಠಾನದ ಎಂ.ವಿ.ಸೀ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಡಾ.ಪಿ.ವಿ. ನಾರಾಯಣ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News