ಬೆಂಗಳೂರು: ಸೈಕಲ್ ಸವಾರಿ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
Update: 2019-04-14 04:38 GMT
ಬೆಂಗಳೂರು: ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿಯಾಗಿ ಹಮ್ಮಿಕೊಂಡಿದ್ದ ಸೈಕಲ್ ಸವಾರಿ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹಾಗೂ ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರು ಚಾಲನೆ ನೀಡಿದರು.
ನಗರದ ಕಂಠೀರವ ಸ್ಟೇಡಿಯಂ ಆವರಣದಿಂದ ಪ್ರಾರಂಭವಾದ ಸೈಕಲ್ ಸವಾರಿ ಜಾಥ 30 ಕಿ.ಮಿ ಸಂಚರಿಸಲಿದೆ. ನೂರಾರು ಸೈಕಲ್ ಸವಾರಿ ಪ್ರೇಮಿಗಳು ಮತದಾರರ ಜಾಗೃತಿಯ ಫಲಕಗಳೊಂದಿಗೆ ಒಟ್ಟಾಗಿ ಸಂಚರಿಸುತ್ತಿರುವುದು ಆಕರ್ಷಣೀಯವಾಗಿದೆ.