ಸ್ನೇಹಿತನ ಕೊಲೆ ಪ್ರಕರಣ: ದಂಪತಿ ಬಂಧನ

Update: 2019-04-14 13:04 GMT

ಬೆಂಗಳೂರು, ಎ.14: ಸ್ನೇಹಿತನನ್ನು ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಪತಿ-ಪತ್ನಿಯನ್ನು ಇಲ್ಲಿನ ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ನಗರದ ನಿವಾಸಿಗಳಾದ ಮೋಹನ್(29) ಮತ್ತು ಅವರ ಪತ್ನಿ ರಮ್ಯಾ(25) ಬಂಧಿತ ಆರೋಪಿಗಳಾಗಿದ್ದು, ಮಧು ಎಂಬಾತ ಕೊಲೆಯಾಗಿರುವ ಸ್ನೇಹಿತ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಗೋಪನಹಳ್ಳಿಯವರಾದ ದಂಪತಿ, ನಗರದ ಲಗ್ಗೆರೆಯ ಲವಕುಶನಗರದಲ್ಲಿ ವಾಸಿಸುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ಮೋಹನ್ ಪತ್ನಿ ರಮ್ಯಾ ಅವರೊಂದಿಗೆ ಮೃತ ಮಧು ಸಲುಗೆ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಬಳಿಕ, ರಮ್ಯಾ ಅವರಿಗೆ ಮಧು ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಮೋಹನ್ ಮತ್ತು ರಮ್ಯಾ ಸೇರಿ ಮಧು ಮೇಲೆ ಶನಿವಾರ 8:30ರ ಸುಮಾರಿಗೆ ಹಲ್ಲೆ ನಡೆಸಿದ ಪರಿಣಾಮ, ತಲೆಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ರಾಜಗೋಪಲನಗರ ಠಾಣಾ ಪೊಲೀಸರು ದಂಪತಿಯನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News