ಶಾಸಕರ ಭವನದ ಮೇಲಿಂದ ಬಿದ್ದು ಬಸ್‌ ನಿರ್ವಾಹಕ ಮೃತ್ಯು

Update: 2019-04-14 15:43 GMT

ಬೆಂಗಳೂರು, ಎ.14: ಕೆಎಸ್ಸಾರ್ಟಿಸಿ ಬಸ್‌ನ ನಿರ್ವಾಹಕನೋರ್ವ ಶಾಸಕರ ಭವನ ಕಟ್ಟಡ ಮೇಲಿಂದ ಜಿಗಿದು ಮೃತಪಟ್ಟಿರುವ ಘಟನೆ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾವಳ್ಳಿ ಮೂಲದ ಶಿವಶಂಕರ್(44) ಮೃತಪಟ್ಟಿರುವ ಕೆಎಸ್ಸಾರ್ಟಿಸಿ ಸಿಬ್ಬಂದಿ ಎಂದು ತಿಳಿದುಬಂದಿದೆ.

ರವಿವಾರ ಮಧ್ಯಾಹ್ನ 2 ಗಂಟೆಗೆ ಈ ದುರ್ಘಟನೆ ನಡೆದಿದ್ದು, ನಗರದ ಶಾಸಕರ ಭವನದ 5ನೇ ಮಹಡಿ ಮೇಲಿಂದ ಶಿವಶಂಕರ್ ಜಿಗಿದಿದ್ದಾರೆ. ಆದರೆ, ಇದು ಆತ್ಮಹತ್ಯೆಯೂ ಅಥವಾ ಆಕಸ್ಮಿಕವಾಗಿ ನಡೆದಿರುವ ಘಟನೆಯೋ ಎಂಬುದರು ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಘಟನೆ ಸಂಬಂಧ ಪೊಲೀಸರು ಸಿಸಿಟಿವಿ ದೃಶ್ಯಾವಾಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಮೃತದೇಹವನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News