ವಿಜಯ ಸಂಕಲ್ಪ ರ‍್ಯಾಲಿ ಸಂದರ್ಭ ವೇದಿಕೆಯಲ್ಲಿ ಅತ್ತ ಬಿಜೆಪಿ ನಾಯಕ

Update: 2019-04-14 17:43 GMT

ಚಂಡಿಗಢ, ಎ. 14: ವಿಜಯ ಸಂಕಲ್ಪ ರ‍್ಯಾಲಿಯ ಸಂದರ್ಭ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಗದ ಕಾರಣಕ್ಕೆ ಬಿಜೆಪಿಯ ಮಾಜಿ ಶಾಸಕ ರಾಮ್ ರತನ್ ಅವರು ಬಿಕ್ಕಿ ಬಿಕ್ಕಿ ಅತ್ತ ಘಟನೆ ಹರ್ಯಾಣದಲ್ಲಿ ನಡೆದಿದೆ.

ಹರ್ಯಾಣದ ಔರಂಗಾಬಾದ್‌ನಲ್ಲಿ ಬಿಜೆಪಿ ಈ ವಿಜಯ ಸಂಕಲ್ಪ ರ‍್ಯಾಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೂಡ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಹೊಡಾಲ್ ಪ್ರದೇಶದ ಬಿಜೆಪಿಯ ಮಾಜಿ ಶಾಸಕ ರಾಮ್‌ರಥನ್ ಅವರಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ವೇದಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News