ಮೋದಿ ಕ್ಷೇತ್ರ ವಾರಾಣಸಿಯಲ್ಲಿ ನದಿ ಸವಾರಿಯ ಮೂಲಕ ಪ್ರಿಯಾಂಕ ಗಾಂಧಿ ಪ್ರಚಾರ

Update: 2019-04-14 18:44 GMT

 ಲಕ್ನೋ, ಎ.14: ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವಾರಾಣಸಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಈ ತಿಂಗಳಾಂತ್ಯದಲ್ಲಿ ನದಿ ಸವಾರಿಯ ಮೂಲಕ ಮೂರು ದಿನ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

  ಚಂದೌಲಿ, ಮವು ಮತ್ತು ಬಲ್ಲಿಯ ಜಿಲ್ಲೆಗಳನ್ನು ಶೀಘ್ರವಾಗಿ ತಲುಪಲು ಮೋಟಾರ್ ಬೋಟ್‌ನಲ್ಲಿ ಪ್ರಿಯಾಂಕ ಗಾಂಧಿ ತೆರಳಲಿದ್ದಾರೆ. ಮಾರ್ಚ್ 17ರಿಂದ 20ರವರೆಗೆ ಇದೇ ರೀತಿ ಅವರು ಪ್ರಯಾಗ್‌ರಾಜ್‌ನಿಂದ ವಾರಾಣಸಿಯವರೆಗೆ 140 ಕಿ.ಮೀ ದೂರವನ್ನು ಮೋಟಾರ್ ಬೋಟ್ ಮೂಲಕ ಕ್ರಮಿಸಿದ್ದರು ಎಂದು ಮುಖಂಡರು ತಿಳಿಸಿದ್ದಾರೆ.

ಸೋಮವಾರ ಪ್ರಿಯಾಂಕ ಗಾಂಧಿ ಸಿಕ್ರಿಯಲ್ಲಿಮ ಎಪ್ರಿಲ್ 23ರಂದು ಬಾರಾಬಂಕಿಯಲ್ಲಿ, ಎಪ್ರಿಲ್ 24ರಿಂದ 26ರವರೆಗೆ ಬುಂದೇಲ್‌ಖಂಡ್ ಮತ್ತು ಉನ್ನಾವೊದಲ್ಲಿ, ಎಪ್ರಿಲ್ 27ರಂದು ಧೌರ್‌ಹಾರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News