ಬಿಜೆಪಿಗೆ ತಪ್ಪಿ ಮತ ಹಾಕಿದ್ದಕ್ಕಾಗಿ ಕೈಬೆರಳನ್ನು ಕತ್ತರಿಸಿಕೊಂಡ ಬಿಎಸ್ಪಿ ಬೆಂಬಲಿಗ

Update: 2019-04-19 04:52 GMT

ಮೀರಠ್, ಎ. 19: ಗುರುವಾರ ನಡೆದ ಎರಡನೇ ಹಂತದ ಮತದಾನದ ವೇಳೆ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಬಹುಜನ ಸಮಾಜ ಪಕ್ಷದ ಚಿಹ್ನೆ ಒತ್ತುವ ಬದಲು ತಪ್ಪಾಗಿ ಬಿಜೆಪಿ ಚಿಹ್ನೆಯನ್ನು ಒತ್ತಿದ್ದಕ್ಕೆ ಪ್ರಾಯಶ್ಚಿತಾರ್ಥವಾಗಿ ಬಿಎಸ್ಪಿ ಬೆಂಬಲಿಗರೊಬ್ಬರು ತಮ್ಮ ಕೈಬೆರಳನ್ನೇ ಕತ್ತರಿಸಿಕೊಂಡ ವಿಲಕ್ಷಣ ಪ್ರಸಂಗ ವರದಿಯಾಗಿದೆ.

ಬುಲಂದ್‌ಶಹರ್ ಪಟ್ಟಣದ ಶಿಖಾರಪುರ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ.

ಬುಲಂದ್‌ಶಹರ್ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಭೋಲಾ ಸಿಂಗ್ ಅವರು, ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಯೋಗೀಶ್ ವರ್ಮಾ ವಿರುದ್ಧ ಸೆಣೆಸುತ್ತಿದ್ದಾರೆ.
ಅಬ್ದುಲ್ಲಾಪುರ ಹುಲಸಾನ ಗ್ರಾಮದ ನಿವಾಸಿ, ಬಿಎಸ್ಪಿ ಬೆಂಬಲಿಗ ಪವನ್ ಕುಮಾರ್ (25) ವರ್ಮಾ ಅವರಿಗೆ ಮತ ಚಲಾಯಿಸುವ ಬದಲು ತಪ್ಪಾಗಿ ಬಿಜೆಪಿ ಅಭ್ಯರ್ಥಿಯ ಎದುರಿನ ಗುಂಡಿ ಅದುಮಿದರು. ತಾನು ಮಾಡಿದ ತಪ್ಪಿನ ಅರಿವಾಗಿ ತಕ್ಷಣ ಮನೆಗೆ ತೆರಳಿ ಚಾಕುವಿನಿಂದ ತಮ್ಮ ಕೈಬೆರಳನ್ನು ಕತ್ತರಿಸಿಕೊಂಡರು.

ಬಳಿಕ ಈ ಘಟನೆ ಕುರಿತ ವೀಡಿಯೊವನ್ನು ಟ್ವೀಟ್ ಮಾಡಿರುವ ಪವನ್, "ನನ್ನ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಂಡಿದ್ದೇನೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News